ಆ್ಯಪ್ನಗರ

ನಿರ್ದೇಶಕರು ನಿರ್ಗತಿಕರಾಗಿದ್ದಾರೆ ಎಂದ ಪ್ರೇಮ್‌ ವಿರುದ್ಧ ಆಕ್ರೋಶ

ಒಂದೆರಡು ದಿನಗಳಲ್ಲೇ ನಿರ್ದೇಶಕ ಪ್ರೇಮ್‌ ಎರಡು ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ. ದಿ ವಿಲನ್‌ ಚಿತ್ರದಲ್ಲಿ ಬಳಸಿಕೊಂಡಿರುವ ಹಾಡಿನಿಂದಾಗಿ ಅಭಿಮಾನಿಗಳ ಅಕ್ರೋಶಕ್ಕೆ ಸಿಕ್ಕ ಪ್ರೇಮ್‌, ಮತ್ತೆ ತಮ್ಮ ಮಾತಿನಿಂದ ನಿರ್ದೇಶಕರೊಬ್ಬರ ಕೋಪಕ್ಕೆ ಕಾರಣರಾಗಿದ್ದಾರೆ.

Vijaya Karnataka | 25 Jun 2018, 12:01 pm
Vijaya Karnataka Web prem
ಒಂದೆರಡು ದಿನಗಳಲ್ಲೇ ನಿರ್ದೇಶಕ ಪ್ರೇಮ್‌ ಎರಡು ವಿವಾದಗಳಲ್ಲಿ ಸಿಕ್ಕಿಕೊಂಡಿದ್ದಾರೆ. ದಿ ವಿಲನ್‌ ಚಿತ್ರದಲ್ಲಿ ಬಳಸಿಕೊಂಡಿರುವ ಹಾಡಿನಿಂದಾಗಿ ಅಭಿಮಾನಿಗಳ ಅಕ್ರೋಶಕ್ಕೆ ಸಿಕ್ಕ ಪ್ರೇಮ್‌, ಮತ್ತೆ ತಮ್ಮ ಮಾತಿನಿಂದ ನಿರ್ದೇಶಕರೊಬ್ಬರ ಕೋಪಕ್ಕೆ ಕಾರಣರಾಗಿದ್ದಾರೆ.

ದಿ ವಿಲನ್‌ ಚಿತ್ರದ ಟೀಸರ್‌ ರಿಲೀಸ್‌ಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗ ದಿ.28ರಂದು ರಿಲೀಸ್‌ ಮಾಡುವುದಾಗಿ ಪ್ರೇಮ್‌ ಪ್ರಕಟಿಸಿದ್ದಾರೆ. ಈ ಸಮಾರಂಭಕ್ಕೆ 500 ರೂ.ನ ಟಿಕೆಟ್‌ ಇಡಲಾಗಿದ್ದು, ಸಂಗ್ರಹವಾದ ಟಿಕೆಟ್‌ ಹಣವನ್ನು ಹಿರಿಯ ನಿರ್ದೇಶಕರಿಗೆ ನೀಡುವುದಾಗಿ ಎಫ್‌ಬಿ ಲೈವ್‌ನಲ್ಲಿ ಹೇಳಿದ್ದಾರೆ. ಹೀಗೆ ಹೇಳುವಾಗ, 'ನಿರ್ದೇಶಕರು ಚಿತ್ರದ ಹೀರೊ. ಆದರೆ, ಇಂದು ಎಷ್ಟೋ ಒಳ್ಳೆಯ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕರು ನಿರ್ಗತಿಕರಾಗಿದ್ದಾರೆ. ಟಿ. ರಘು, ಎ.ಆರ್‌. ಬಾಬು ಮತ್ತಿತರ ನಿರ್ದೇಶಕರು ಕಷ್ಟದಲ್ಲಿದ್ದಾರೆ. ಅವರಿಗೆ ಅಂದೇ ಸಮಾರಂಭದಲ್ಲಿ ಧನ ಸಹಾಯ ಮಾಡಲಾಗುವುದು' ಎಂದು ಹೇಳಿದರು. ಈ ಮಾತಿನಿಂದ ನೊಂದ ಎ.ಆರ್‌.ಬಾಬು ನಿರ್ಗತಿಕರು ಎಂಬ ಪದವನ್ನು ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರೇಮ್‌ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌