Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ

Drumstick: ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ.

Drumstick: ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ! ಮಿಸ್ ಮಾಡಬೇಡಿ
ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನೆ ಹೊಂದಿವೆ!
Follow us
| Edited By: ಸಾಧು ಶ್ರೀನಾಥ್​

Updated on: Jun 01, 2022 | 6:06 AM

ನುಗ್ಗೆ ಕಾಯಿ, ನುಗ್ಗೆ ಸೊಪ್ಪು ಎಲ್ಲರಿಗೂ ಚಿರಪರಿಚಿತವಾದ ತರಕಾರಿ. ನುಗ್ಗೆ ಗಿಡದ ಕಾಯಿ, ಸೊಪ್ಪು, ಹೂವು, ಅಂಟು, ಚಕ್ಕೆ, ಬೇರು ಎಲ್ಲವೂ ಔಷಧೀಯ ಗುಣಗಳಿಂದ ತುಂಬಿವೆ. ಆಂಗ್ಲ ಭಾಷೆಯಲ್ಲಿ Drumstick tree. Moringa drumstick tree, ಸಂಸ್ಕೃತ ಭಾಷೆಯಲ್ಲಿ ಶೋಭಾಂಜನ, ತೀಕ್ಷ್ಣ ಗಂಧ ಎಂದೂ. ಹಿಂದಿ ಭಾಷೆಯಲ್ಲಿ ಸಹಜನ, ಮುನಗಾ ಎಂದೂ ತೆಲುಗುವಿನಲ್ಲಿ ಮುನಗ ಮಾನು, ಮುನಗ ಕಾಯಿ ಎಂದು ಕರೆಯುತ್ತಾರೆ.

ನುಗ್ಗೆಯಲ್ಲಿ ಕಿತ್ತಳೆಗಿಂತ ಹೆಚ್ಚು ಸಿ ವಿಟಮಿನ್, ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಕ್ಯಾರೆಟ್ ಗಿಂತ ಹೆಚ್ಚು ಎ ವಿಟಮಿನ್, ಬಾದಾಮಿಗಿಂತ ಹೆಚ್ಚು ಇ ವಿಟಮಿನ್ ಇದೆಯೆಂದು ಹೇಳಲಾಗುತ್ತದೆ. ನುಗ್ಗೆ ಕಾಯಿ ಗಿಡ ತರಕಾರಿ ಹಾಗೂ ಮನೆ ಮದ್ದಾಗಿ ಹಿಂದಿನಿಂದಲೂ ಬಳಕೆಯಲ್ಲಿದೆ:

  1. * ನುಗ್ಗೆ ಸೊಪ್ಪು ಬೇಯಿಸಿ ತೆಗೆದು ರಸಕ್ಕೆ ಹಾಲು ಸಕ್ಕರೆ ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  2. * ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ನುಗ್ಗೆ ಸೊಪ್ಪು ಕಾಯಿ ಉತ್ತಮ ಆಹಾರವಾಗಿದೆ.
  3. * ಬೇಯಿಸಿ ಬಸಿದ ಸೊಪ್ಪಿನ ರಸಕ್ಕೆ ನಿಂಬೆ ರಸ ಸೇರಿಸಿ ಸೇವಿಸಿದರೆ ತಲೆ ಸುತ್ತು ನಿವಾರಣೆಯಾಗುತ್ತದೆ.
  4. * ನುಗ್ಗೆ ಕಾಯಿ ಸೇವನೆಯಿಂದ ನಿರ್ವೀರ್ಯತೆ, ನರಗಳ ದೌರ್ಬಲ್ಯ, ಮಲಬದ್ಧತೆ ನಿವಾರಣೆಯಾಗುತ್ತದೆ.
  5. * ನುಗ್ಗೆ ಎಲೆಗಳ 10 ಎಂ ಎಲ್ ರಸದಲ್ಲಿ ಶುದ್ಧವಾದ ಒಂದು ಟೀ ಚಮಚ ಜೇನುತುಪ್ಪ ಬೆರೆಸಿ ಅಂಜನ ಮಾಡಿದರೆ ಕಣ್ಣಿನ ರೋಗಗಳಲ್ಲಿ ಉಪಯುಕ್ತವಾಗಿದೆ.
  6. * ದೇಹದ ಬಾವು ನೋವುಗಳಿಗೆ ನುಗ್ಗೆ ಗಿಡದ ಚಕ್ಕೆಯನ್ನು ನೀರಿನಲ್ಲಿ ತೇಯ್ದು 10 ಗ್ರಾಂ ನಷ್ಟು ಸೇವನೆ ಮಾಡಬೇಕು.
  7. * ಪುರುಷತ್ವ ವೃದ್ಧಿಗೆ ಎಂಟ್ಹತ್ತು ನುಗ್ಗೆ ಹೂಗಳನ್ನು ಹಾಲಿನಲ್ಲಿ ಬೇಯಿಸಿ ಎರಡು ಬಾರಿ ಕುಡಿಯಬೇಕು.
  8. * ನುಗ್ಗೆ ಸೊಪ್ಪು ಅರೆದು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಈ ಎಣ್ಣೆಯನ್ನು ಮೊಳಕಾಲು ನೋವಿಗೆ ಬಳಸಬಹುದಾಗಿದೆ.
  9. * ನುಗ್ಗೆ ಗಿಡದ ಬೇರನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿದ ಎಣ್ಣೆಯು ಚರ್ಮ ರೋಗಗಳಿಗೆ ಉಪಯುಕ್ತವಾಗಿದೆ.
  10. * ನುಗ್ಗೆ ಗಿಡದ 100 ಗ್ರಾಂ ನಷ್ಟು ಎಲೆಗಳಲ್ಲಿ 20 ಗ್ರಾಂ ಒಣ ಶುಂಠಿ, 05 ಗ್ರಾಂ ಇಂಗು ಸೇರಿಸಿ ನೀರಿನಲ್ಲಿ ಅರೆದು ಸಣ್ಣ ಸಣ್ಣ ಗಾತ್ರದ ಗುಳಿಗೆಗಳನ್ನು ಮಾಡಿ ದಿನದಲ್ಲಿ ಮೂರು ಬಾರಿ ಸೇವಿಸಿದರೆ ಹೊಟ್ಟೆಯುಬ್ಬರ ಮತ್ತು ಹೊಟ್ಟೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.
  11. * ಇದರ ಅಂಟನ್ನು ಬಾಯಿಯಲ್ಲಿ ಚೀಪುತ್ತಿದ್ದರೆ ಹಲ್ಲು ನೋವಿಗೆ ಪರಿಹಾರ.
  12. * ಅರ್ಧ ತಲೆ ನೋವಿಗೆ ನುಗ್ಗೆ ಎಲೆಗಳ ರಸವನ್ನು ನೋವಿರುವ ವಿರುದ್ಧದ ಕಿವಿಯಲ್ಲಿ ನಾಲ್ಕೈದು ಹನಿ ಹಾಕಬೇಕು.
  13. * ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆ ಮಾಡುವ ಮತ್ತು ರಕ್ತದೊತ್ತಡ ನಿವಾರಿಸುವ ಗುಣ ನುಗ್ಗೆಯಲ್ಲಿದೆ. ಮೂಳೆಗಳನ್ನು ಬಲಪಡಿಸುವ, ಮಲಬದ್ಧತೆ ಅಸಿಡಿಟಿ ಗ್ಯಾಸ್ಟ್ರಿಕ್ ದೂರ ಮಾಡುವ ಗುಣ ಹೊಂದಿರುವ ಈ ನುಗ್ಗೆ ಗಿಡದ ಚಕ್ಕೆಗೆ ಸ್ವದೇಶಿ ಪೆನ್ಸಿಲಿನ್ ಎಂದೂ ಕರೆಯಲಾಗುತ್ತದೆ.
  14. ಮಾರುಕಟ್ಟೆಯಲ್ಲಿ ನುಗ್ಗೆ ಬೀಜದ ಎಣ್ಣೆ, Moringa ಹೆಸರಿನಲ್ಲಿ ಇದರ ಸೊಪ್ಪಿನ ಪೌಡರ್ ಮಾರಾಟ ಮಾಡುತ್ತಾರೆ. (ಮಾಹಿತಿ ಸಂಗ್ರಹ: ಎಸ್​ ಹೆಚ್​ ನದಾಫ್)

ತಾಜಾ ಸುದ್ದಿ
ಮುರಾಘಾ ಶ್ರೀಗಳಿಗೆ 14-ದಿನ ನ್ಯಾಯಾಂಗ ಬಂಧನ; ಪುನಃ ಚಿತ್ರದುರ್ಗದ ಜೈಲಿಗೆ
ಮುರಾಘಾ ಶ್ರೀಗಳಿಗೆ 14-ದಿನ ನ್ಯಾಯಾಂಗ ಬಂಧನ; ಪುನಃ ಚಿತ್ರದುರ್ಗದ ಜೈಲಿಗೆ
ಸಂತ್ರಸ್ತೆ ಸಂಬಂಧಿಕರೆಂದ ಮಹಿಳೆಯರು ಆಕೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದರು!
ಸಂತ್ರಸ್ತೆ ಸಂಬಂಧಿಕರೆಂದ ಮಹಿಳೆಯರು ಆಕೆಯನ್ನೇ ಕಟಕಟೆಯಲ್ಲಿ ನಿಲ್ಲಿಸಿದರು!
ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ: ಕುಮಾರಸ್ವಾಮಿ
ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ: ಕುಮಾರಸ್ವಾಮಿ
ಪ್ರಜ್ವಲ್ ರೇವಣ್ಣ ಪ್ರಕರಣ: ಬಿಜೆಪಿ ತನ್ನ ನಿಲುವು ಪ್ರಕಟಿಸಬೇಕು: ಶಿವಕುಮಾರ್
ಪ್ರಜ್ವಲ್ ರೇವಣ್ಣ ಪ್ರಕರಣ: ಬಿಜೆಪಿ ತನ್ನ ನಿಲುವು ಪ್ರಕಟಿಸಬೇಕು: ಶಿವಕುಮಾರ್
ಪ್ರಜ್ವಲ್ ಎಲ್ಲೇ ಇದ್ದರೂ ಎಸ್ಐಟಿ ವಿಚಾರಣೆಗೆ ಕರೆದರೆ ಬರುತ್ತಾನೆ: ರೇವಣ್ಣ
ಪ್ರಜ್ವಲ್ ಎಲ್ಲೇ ಇದ್ದರೂ ಎಸ್ಐಟಿ ವಿಚಾರಣೆಗೆ ಕರೆದರೆ ಬರುತ್ತಾನೆ: ರೇವಣ್ಣ
ಪ್ರಜ್ವಲ್ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರರಿಂದ ಕ್ಲುಪ್ತ ಪ್ರತಿಕ್ರಿಯೆ
ಪ್ರಜ್ವಲ್ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರರಿಂದ ಕ್ಲುಪ್ತ ಪ್ರತಿಕ್ರಿಯೆ
ಪೆನ್ ಡ್ರೈವ್ ರಿಲೀಸ್​ ಮಾಡಿದ್ದರ ಹಿಂದೆ ಕುತಂತ್ರ ಸ್ಪಷ್ಟ: ಕುಮಾರಸ್ವಾಮಿ
ಪೆನ್ ಡ್ರೈವ್ ರಿಲೀಸ್​ ಮಾಡಿದ್ದರ ಹಿಂದೆ ಕುತಂತ್ರ ಸ್ಪಷ್ಟ: ಕುಮಾರಸ್ವಾಮಿ
ಶ್ರೀನಿವಾಸ ಪ್ರಸಾದ್ ಸಾವು, ಶೋಕಸಾಗರದಲ್ಲಿ ಮುಳುಗಿರುವ ಅಪಾರ ಬಂಧುವರ್ಗ
ಶ್ರೀನಿವಾಸ ಪ್ರಸಾದ್ ಸಾವು, ಶೋಕಸಾಗರದಲ್ಲಿ ಮುಳುಗಿರುವ ಅಪಾರ ಬಂಧುವರ್ಗ
Modi Bagalkot Rally: ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ
Modi Bagalkot Rally: ಬಾಗಲಕೋಟೆಯಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ
ಅಗಲಿದ ಶ್ರೀನಿವಾಸ ಪ್ರಸಾದ್ ಶೋಷಿತವರ್ಗದ ಧ್ವನಿಯಾಗಿದ್ದರು: ಜಿಟಿ ದೇವೇಗೌಡ
ಅಗಲಿದ ಶ್ರೀನಿವಾಸ ಪ್ರಸಾದ್ ಶೋಷಿತವರ್ಗದ ಧ್ವನಿಯಾಗಿದ್ದರು: ಜಿಟಿ ದೇವೇಗೌಡ